Published February 28, 2026 | Version v1
Journal article Open

ಅನುವಾದ ಸಾಹಿತ್ಯ: ಒರಿಯಾದ ಮನೋಜ್ ದಾಸ್‌ರವರ ಸಣ್ಣಕತೆಗಳು

Authors/Creators

Description

ಕನ್ನಡ ಸಾಹಿತ್ಯದ ಹೊಸ ಪ್ರವೃತ್ತಿಯಾಗಿ ಅನುವಾದ ಸಾಹಿತ್ಯವನ್ನು ಪರಿಗಣಿಸುವುದು ವರ್ತಮಾನದ ಅಗತ್ಯವಾಗಿದೆ. ಒಂದು ಸಾಹಿತ್ಯವು ಕಾಲಾತೀತವಾಗಿ ಹಾಗೂ ಭಾಷಾತೀತವಾಗಿ ಚಲಿಸಬೇಕೆಂದಾಗ ಭಾಷಾಂತರದ ಪಾತ್ರ ಬಹಳ ಮುಖ್ಯವಾದುದು. ಒಂದು ಸಮುದಾಯದ ಸಾಂಸ್ಕೃತಿಕ ಮಜಲುಗಳು ಇತರ ದೇಶ, ಪರಿಸರ, ಸಮುದಾಯದ ಸಂಸ್ಕೃತಿಯೊಂದಿಗೆ ಸಾಮ್ಯತೆ ಹಾಗೂ ಭಿನ್ನತೆಗಳನ್ನು ಹೊಂದಿರುವುದು ಅರಿವಿಗೆ ಬರುವುದು ತೌಲನಿಕ ಅಧ್ಯಯನದಿಂದ ಎಂದರೆ ತಪ್ಪಾಗಲಾರದು. ಅನುವಾದ ಸಾಹಿತ್ಯದ ಭಾಗವಾಗಿ ತೌಲನಿಕ ಸಾಹಿತ್ಯವನ್ನು ಗುರುತಿಸಬಹುದಾಗಿದ್ದು, ಇದು ಭಾಷೆ, ಕುಲ, ಸಂಸ್ಕೃತಿ, ಧರ್ಮ ಇವುಗಳ ಆಚೆಗಿನ ಸಾಹಿತ್ಯದ ನೆಲೆಯನ್ನು ವಿಸ್ತರಿಸುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ನಂತರದ ಭಾರತದ ಸಾಮಾಜಿಕ ಹಾಗೂ ರಾಜಕೀಯ ರಂಗದ ಏಳು-ಬೀಳನ್ನು ವಿವರಿಸುವ ಸಂದರ್ಭದಲ್ಲಿ ಕನ್ನಡದ ಸಣ್ಣಕತೆಗಳ ಆಶಯಗಳನ್ನು ಮನೋಜ್ ದಾಸ್ ಅವರ ‘ಕಾಣೆಯಾದ ಟೋಪಿಯ ರಹಸ್ಯ ಮತ್ತಿತರ ಕತೆಗಳು’ ವ್ಯಕ್ತಪಡಿಸುವುದರಿಂದ ಪ್ರಸ್ತುತ ಅಧ್ಯಯನದಲ್ಲಿ ಕೆಲವು ಕತೆಗಳನ್ನು ತೌಲನಿಕವಾಗಿ ಗ್ರಹಿಸಲಾಗಿದೆ.

ಭಾರತೀಯ ಸಮಾಜವು ಬಹಳ ಹಿಂದಿನಿಂದಲೂ ಊಳಿಗಮಾನ್ಯ ಹಾಗೂ ಜಮೀನ್ದಾರಿಕೆಯ ಸಂಪ್ರದಾಯದಲ್ಲಿ ಬೆಳೆದು ಬಂದಿದ್ದು, ಸ್ವಾತಂತ್ರ್ಯದಿಂದ ಈ ವ್ಯವಸ್ಥೆಯ ಹಠಾತ್ ಅಂತ್ಯವು ಸಮಾಜವನ್ನು ಪಲ್ಲಟಕ್ಕೆ ಗುರಿ ಮಾಡಿತು. ಪಾಶ್ಚಿಮಾತ್ಯ ಮಾದರಿಯ ಪ್ರಜಾಪ್ರಭುತ್ವವು ಭಾರತೀಯರ ಜೀವನದಲ್ಲಿ ಊಳಿಗಮಾನ್ಯತೆಯನ್ನು ನಿರ್ಮೂಲನೆ ಮಾಡಿ ಪರಿವರ್ತನೆಯ ಪಥವನ್ನು ಪರಿಚಯಿಸಿತು. ಇದರಿಂದಾಗಿ ರಾಜರು, ಜಮೀನ್ದಾರರು, ಭೂಮಾಲೀಕರು ಹಾಗೂ ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಇದುವರೆವಿಗೂ ಅಳವಡಿಸಿಕೊಂಡಿದ್ದ ಅಭ್ಯಾಸಗಳಿಗೆ ಮತ್ತು ಮನಸ್ಥಿತಿಗೆ ಅನ್ಯವಾದ ವ್ಯವಸ್ಥೆಯನ್ನು ಮುಖಾಮುಖಿಯಾದರು. ಈ ಬಗೆಯ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಯನ್ನು ಮನೋಜ್ ದಾಸ್‌ರ ಮುಸ್ಸಂಜೆಯ ಹಕ್ಕಿಗಳು, ಮೊಲದ ಮನಸ್ಸು ಕತೆಗಳು ಕಟ್ಟಿಕೊಡುತ್ತವೆ.

Files

5. ಅನುವಾದ ಸಾಹಿತ್ಯ- ಒರಿಯಾದ ಮನೋಜ್ ದಾಸ್‌ರವರ ಸಣ್ಣಕತೆಗಳು.pdf