ಹೊಸಗನ್ನಡ ಅರುಣೋದಯ
Description
ಅವರು ಕಂಡಿದ್ದ ಹಸ್ತಪ್ರತಿಗಳು ಕೆಲವೇ ಇದ್ದುವು. ಕೆಸಮೈಜರ್ ಒಂದು ಪತ್ರದಲ್ಲಿ -Do you think that a proper person could be employed who would go about the Canerese country, to collect good manuscripts ? o ವಿಚಾರಿಸುತ್ತಾನೆ ! ಅದಕ್ಕೆ ಮೆವ್ಗ್ಲಿಂಗರ ಪ್ರತಿಕ್ರಿಯೆ : “ಸಿಕ್ಕಬಹುದು, ಅವನಿಗೆ ಕನ್ನಡ ಚೆನ್ನಾಗಿ ಗೊತ್ತಿರಬೇಕು. ಶುದ್ಧ ಪಾಠದ ಹಸ್ತಪ್ರತಿಯನ್ನು ಗುರುತಿಸಬಲ್ಲವನಾಗಿರಬೇಕು.” ಎಲ್ಲಿ ಸಿಕ್ಕಬೇಕು ಅಂಥ ವ್ಯಕ್ತಿ ? ಮಾತ್ರವಲ್ಲ, ಶುದ್ಧ ಪಾಠ ಇರಬೇಕು ಎಂದು ಹಂಬಲಿಸುವ ಎಷ್ಟು ಜನ ಇದ್ದರು ಆಗಿನ ದಿನಗಳಲ್ಲಿ ? ಏನೇ ಆಗಲಿ ; ಶುದ್ಧ ಪಾಠ ಬೇಕೆಂದರೆ ಮೊದಲು ಬಿಳಿ ಕಾಗದದಲ್ಲಿ ಪ್ರತಿಮಾಡುವವರು ಬೇಕಲ್ಲ ? ಕೆಸಮೈಜರ್ ಬರೆದ : “ಯಾರನ್ನಾದರೂ ಅಂಥವರನ್ನು ನೋಡಿರಿ, ನಾನು ಅವನ ಸಂಬಳ ಕೊಡುವೆ. ಆಗ ಮೊವ್ಗ್ಲಿಂಗ್ 'ಲಕ್ಷ್ಮೀನರಸಿಂಹಯ್ಯ ಎಂಬುವವನನ್ನು ಹನ್ನೆರಡು ರೂ. ಸಂಬಳದ ಮೇಲೆ ಗೊತ್ತುಪಡಿಸಿದರು. 'ಶುದ್ಧಪಾಠ ಎನ್ನುವುದು ಅಷ್ಟು ಸುಲಭವೆ? ಅವನನ್ನು ಬಿಡಿಸಿ ಆನಂದರಾವ್ ಎಂಬವನನ್ನು ನೇಮಿಸಲಾಯಿತು.
Files
3.pdf
Files
(1.4 MB)
| Name | Size | Download all |
|---|---|---|
|
md5:205c3b715d8782abea7125a4dba8b4f5
|
1.4 MB | Preview Download |