ವಸಾಹತು ಶಾಹಿ ಕಾಲದ ಬಾಂಬೆ ಕರ್ನಾಟಕದಲ್ಲಿ ಸಾಮಾಜಿಕ ಚಳುವಳಿ
Authors/Creators
Description
ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ಬಾಂಬೆ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗಳು ಪ್ರಾರಂಭವಾದವು. ಜಾತಿಯತೆ, ಅಸ್ಪೃಶ್ಯತೆ, ಅಂಧಶ್ರದ್ಧೆ, ಮೂಢನಂಬಿಕೆ, ಅಜ್ಞಾನ, ಅಂಧಕಾರ, ಮಹಿಳೆಯರ ಮೇಲಿನ ಅನ್ಯಾಯ ಹಾಗೂ ಹಿಂದುಳಿದ ವರ್ಗಗಳ ಶೋಷಣೆಯನ್ನು ಪರಿಹರಿಸಲು ಅನೇಕ ಸುಧಾರಣಾ ಚಳುವಳಿಗಳು ಹುಟ್ಟಿಕೊಂಡವು. ಪ್ರಾರ್ಥನಾ ಸಮಾಜ, ಆರ್ಯ ಸಮಾಜ, ಲಿಂಗಾಯತ ಮಠಗಳು ಧಾರ್ಮಿಕ ಸಾಮಾಜಿಕ ಸುಧಾರಣೆಗಳಲ್ಲಿ ಮುಂಚೂಣಿಗೆ ಬಂದವು. ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆ, ಶಾಹೂ ಮಹಾರಾಜರು, ಅಂಬೇಡ್ಕರ್, ದಯಾನಂದ ಸರಸ್ವತಿ ಮುಂತಾದವರ ಪ್ರೇರಣೆಯಿಂದ ಅಸ್ಪೃಶ್ಯತೆ ನಿವಾರಣೆ, ಮಹಿಳಾ ಶಿಕ್ಷಣ, ವಿಧವಾ ಮರುವಿವಾಹ, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಟಗಳು ನಡೆದವು. ಕ್ರೈಸ್ತ ಮಿಷನರಿಗಳು ಶಿಕ್ಷಣದ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಚಳುವಳಿಗಳು ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಬಯಕೆಗಳನ್ನು ಬಿತ್ತಿದವು. ಸಾಮಾಜಿಕ ಜಾಗೃತಿಯಿಂದ ರಾಷ್ಟ್ರೀಯ ಚಳುವಳಿಗೂ ಬಲ ಒದಗಿ ಬಂದಿತು. ಹೀಗಾಗಿ ವಸಾಹತುಶಾಹಿ ಕಾಲದ ಬಾಂಬೆ ಕರ್ನಾಟಕದ ಸಾಮಾಜಿಕ ಚಳುವಳಿಗಳು ಸಮಾಜ ಸುಧಾರಣೆಯೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೂ ಪ್ರೇರಣೆಯಾದವು.
Files
9. ವಸಾಹತು ಶಾಹಿ ಕಾಲದ ಬಾಂಬೆ ಕರ್ನಾಟಕದಲ್ಲಿ ಸಾಮಾಜಿಕ ಚಳುವಳಿ.pdf
Files
(257.5 kB)
| Name | Size | Download all |
|---|---|---|
|
md5:9a0fe1e3b5e7008db8d8c7e476eda2a9
|
257.5 kB | Preview Download |