Published June 3, 2025 | Version v1
Journal article Open

ಬಸವಣ್ಣನವರ ವಚನಗಳಲ್ಲಿ-ಜಾತಿ ನಿರಾಕರಣೆ

Description

ಹನ್ನೇರಡನೆ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಶರಣ ಸಮಾಜವು ಕುಲ, ಮತ, ಲಿಂಗ, ವರ್ಣ, ವರ್ಗಇವುಗಳಿಂದ ಮುಕ್ತವಾಗಿತ್ತು. ಬಸವಣ್ಣನವರು ಜಾತಿಯ ವಿಷ ಬೀಜವನ್ನು ಕಿತ್ತು ನವ ಸಮಾಜದಲ್ಲಿ ಹೇಗೆ ಬದುಕಬೇಕೆಂದು ಸಾರಿದರು. ಮನುಧರ್ಮದ ಕರ್ಮಸಿದ್ದಾಂತವನ್ನು ಬಸವಣ್ಣನವರು ಅಲ್ಲಗಳೆದು ಕಾಯಕ ಸಿದ್ಧಾಂತವನ್ನು ಕಾರ್ಯಗತಗೊಳಿಸಿದರು. ಬಸವಣ್ಣನವರ ಚಿಂತನೆಗಳಲ್ಲಿ ಜಾತಿ ನಿರಾಕರಣೆಯೂ ಸಹ ಮಹತ್ವವಾದ ಚಿಂತನೆಯಾಗಿದೆ. ಜಾತಿ ನಿರಾಕರಣೆ ವಿಚಾರದಲ್ಲಿ ಎಲ್ಲರಿಗಿಂತ ಹೆಚ್ಚು ಮಾನಸಿಕ ಸಂಘರ್ಷವನ್ನು ಹೊಂದಿದವನು ಬಸವಣ್ಣನವರು, ಇಲ್ಲದಿದ್ದರೆ ‘ಉತ್ತಮ ಕುಲದಲ್ಲಿ ಹುಟ್ಟಿದನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯ ಎಂದು ಹೇಳುವ ನೋವು ಏಕಿರಬೇಕಿತ್ತು?’ ಉತ್ತಮ ಜಾತಿ ಸಂಕೋಲನೆಯಿಂದ ಬಿಡಿಸಿಕೊಂಡು ಹೊರಬರುವುದಕ್ಕಾಗಿ ತಾನು ಹುಟ್ಟಿದ ಜಾತಿಯನ್ನು ನಿರಾಕರಣೆ ಮಾಡುತ್ತಾನೆ. ಜಾತಿ ಎಂಬ ಹೆಮ್ಮೆರವನ್ನು ಬುಡಸಮೇತ ಕಿತ್ತು ಹಾಕಲು ಅಂತರ್ಜಾತಿ ವಿವಾಹವನ್ನು ಸಹ ಬಸವಣ್ಣನವರು ಮಾಡುತ್ತಾರೆ. ಇದರೊಂದಿಗೆ ನವ ಸಮಾಜದ ಸೃಷ್ಟಿಗೆ ಕಾರಣನಾಗುತ್ತಾನೆ. ಇಂತಹ ಎಲ್ಲಾ ಅಂಶವನ್ನು ಕುರಿತು ಬಸವಣ್ಣನವರ ವಚನಗಳಲ್ಲಿ ಜಾತಿ ನಿರಾಕರಣೆ ಹೇಗೆ ಮೂಡಿ ಬಂದಿದೆ ಎಂದು ಅರಿಯಬಹುದು. 

Files

ಬಸವಣ್ಣನವರ ವಚನಗಳಲ್ಲಿ-ಜಾತಿ ನಿರಾಕರಣೆ.pdf